ಸ್ಯಾಮಿ ಅಸೋಸಿಯೋಟ್ಸ್ ಲಾಂಛನದಲ್ಲಿ ಟಿ.ಪಿ.ಸಿದ್ದರಾಜು ನಿರ್ಮಿಸುತ್ತಿರುವ ‘ಸಿದ್ಲಿಂಗು ಚಿತ್ರಕ್ಕೆ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಹಾಡೊಂದನ್ನು ಹಾಡಿದ್ದಾರೆ. ವಿಜಯ್ಪ್ರಸಾದ್ ಬರೆದಿರುವ ‘ಬರ್ಬಾದ್ ಬಿಲ್ಡಿಂಗ್ ಬಾಡಿಗೆ ರೂಂ ಎಂಬ ಗೀತೆ ಪುನೀತ್ ಅವರ ಕಂಠಸಿರಿಯಲ್ಲಿ ಮೂಡಿಬಂದಿದೆ.
ಪುನೀತ್ ಹಾಡಿರುವ ಹಾಡಿನ ಚಿತ್ರೀಕರಣ ಮೈಸೂರು ಹಾಗೂ ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ ನಿರ್ಮಿಸಿದ ಸೆಟ್ನಲ್ಲಿ ನಡೆದಿದೆ. ಯೋಗೀಶ್ ಅಭಿನಯಿಸಿದ ಈ ಹಾಡಿಗೆ ಇಮ್ರಾನ್ ನೃತ್ಯ ನಿರ್ದೇಶನ ಮಾಡಿದ್ದಾರೆ.
‘ಸಿದ್ಲಿಂಗುಗೆ ಹಾಡುಗಳ ಚಿತ್ರೀಕರಣ ಭರದಿಂದ ಸಾಗಿದೆ. ಅರಸು ಅಂತಾರೆ ರಚನೆಯ ‘ಎಲ್ಲೆಲ್ಲೊ ಓಡುವ ಮನಸೆ ಯಾಕಿಂತ ಹುಚ್ಚುಚ್ಚು ವರಸೆ ಎಂಬ ಗೀತೆಯ ಚಿತ್ರೀಕರಣ ಮೈಸೂರು ಸುತ್ತಮುತ್ತ ನಡೆದಿದೆ. ಯೋಗೀಶ್, ರಮ್ಯಾ ಅಭಿನಯಿಸಿದ ಈ ಗೀತೆಗೆ ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ.
‘ಅಚ್ಚಚ್ಚು ಬೆಲ್ದಚ್ಚು ಈಡೇರ್ತು ಕಾರ್ ಹುಚ್ಚು ಎಂಬ ಚಿತ್ರದ ಮತ್ತೊಂದು ಗೀತೆಯ ಚಿತ್ರೀಕರಣ ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಸೆಟ್ನಲ್ಲಿ ನಡೆದಿದೆ. ಕಲೈ ನೃತ್ಯ ನಿರ್ದೇಶನ ಮಾಡಿರುವ ಈ ಹಾಡಿಗೆ ಯೋಗೀಶ್ ನೃತ್ಯಗಾರರೊಂದಿಗೆ ಹೆಜ್ಜೆ ಹಾಕಿದರು. ಈ ಗೀತೆಯನ್ನೂ ಅರಸು ಅಂತಾರೆ ಅವರೇ ಬರೆದಿದ್ದಾರೆ.
ಮೈಸೂರು, ಮದ್ದೂರು, ಬೆಂಗಳೂರು, ತಲಕಾಡು ಮುಂತಾದ ಕಡೆ ಚಿತ್ರೀಕರಣ ನಡೆದಿದೆ ಎಂದು ನಿರ್ದೇಶಕ ವಿಜಯ್ಪ್ರಸಾದ್ ತಿಳಿಸಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ.
ಯೋಗೀಶ್ ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ರಮ್ಯಾ. ಅಚ್ಯುತರಾವ್, ಗಿರಿಜಾಲೋಕೇಶ್, ರೇಣುಕಾರಾಧ್ಯ ಗಿರಿಜಾಲೋಕೇಶ್, ರಂಗಾಯಣರಘು, ಶರಣ್, ಎಚ್.ಎಮ್.ಟಿ ವಿಜಯ್, ಕೆ.ಸಿ.ಶ್ರೀಧರ್, ವತ್ಸಲಾ ಮೋಹನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಜ಼್ಞಾನಮೂರ್ತಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನವಿರುವ ‘ಸಿದ್ಲಿಂಗು ಚಿತ್ರಕ್ಕೆ ಉದಯ ಹೆಗಡೆ ಅವರ ಸಂಕಲನವಿದೆ.